Popular Posts

Friday, January 21, 2011

ಮಕ್ಕಾ ಮಸೀದಿ ಸ್ಫೋಟ ತನಿಖೆ ಅರ್ಧದಲ್ಲೇ ಇತಿಶ್ರೀಯಾಗಲಿದೆಯೇ?




ಸ್ವಾಮಿ ಅಸೀಮಾನಂದ ತೀಸ್ ಹಜಾರಿ ನ್ಯಾಯಾಲಯದಲ್ಲಿ ನೀಡಿದ ತಪ್ಪೊಪ್ಪಿಗೆ ಹೇಳಿಕೆಗಳು ಮಾಲೆಗಾಂವ್ ಹಾಗೂ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣಗಳ ಬಗ್ಗೆ ಒಂದು ನಿರ್ದಿಷ್ಟ ಪ್ರಮಾಣದ ಸ್ಪಷ್ಟತೆಯನ್ನು ಮೂಡಿಸಿರಬಹುದು. 2007ರಲ್ಲಿ ನಡೆದ ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟ ಪ್ರಕರಣ ದಲ್ಲೂ ಕೇಸರಿ ಸಂಘಟನೆಗಳ ಕೈವಾಡವಿರುವುದನ್ನು ಅಸೀಮಾನಂದ ಒಪ್ಪಿಕೊಂಡಿದ್ದರೂ ಸಹ, ಈ ಪ್ರಕರಣದ ತನಿಖೆಯು ಸ್ತಬ್ಧಗೊಂಡಿದೆ. ಈ ಪ್ರಕರಣದ ಬಗ್ಗೆ ತನಿಖಾಧಿಕಾರಿಗಳಲ್ಲಿ ಮುತುವರ್ಜಿಯ ಕೊರತೆಯಿರುವುದು ಎದ್ದು ಕಾಣುತ್ತಿದೆ.

ಮಕ್ಕಾ ಮಸೀದಿ ಸ್ಫೋಟ ನಡೆದು ಸುಮಾರು ನಾಲ್ಕು ವರ್ಷಗಳಾದ ಬಳಿಕ ಹೈದರಾಬಾದ್ ಪೊಲೀಸರು ತನಿಖೆಯತ್ತ ಮುಖ ಮಾಡಿದ್ದರಾದರೂ, ಅದೇಕೋ ಹಳಿ ತಪ್ಪುತ್ತಿರುವ ಹಾಗೆ ಕಾಣುತ್ತಿದೆ. ಅದಕ್ಕೂ ಹೆಚ್ಚಾಗಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆಯೆಂಬ ಭಾವನೆ ನಗರದ ಮುಸ್ಲಿಮರಲ್ಲಿ ಬೆಳೆಯತೊಡಗಿದೆ.

ಹೈದರಾಬಾದ್ ಸ್ಫೋಟ ಪ್ರಕರಣದಲ್ಲಿ ತೀವ್ರವಾದಿ ಇಸ್ಲಾಮಿಕ್ ಸಂಘಟನೆಗಳ ಕೈವಾಡವಿದೆಯೆಂದು ಶಂಕಿಸಿ ತನಿಖಾಧಿಕಾರಿಗಳು ಮುಸ್ಲಿಂ ಸಮುದಾಯದ ಹಲವು ಯುವಕರನ್ನು ಬಂಧಿಸಿ ಚಿತ್ರಹಿಂಸೆ ನೀಡಿತ್ತು.

ತೀವ್ರ ಒತ್ತಡ ಬಂದ ಬಳಿಕವಷ್ಟೇ ಹೈದರಾಬಾದ್ ಸ್ಫೋಟ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಯಿತಾದರೂ,ಅದರೆ ಕಳೆದ ಎರಡು ತಿಂಗಳುಗಳಿಂದ ತನಿಖೆಯು ಆಮೆಗತಿಯಲ್ಲಿ ಸಾಗುತ್ತಿದೆ.ಇಂದು ಮಕ್ಕಾ ಮಸೀದಿ ಸ್ಫೋಟ ಪ್ರಕರಣವನ್ನು ಎರಡು ಭಾಗಗಳಾಗಿ ತನಿಖೆ ಮಾಡಲಾ ಗುತ್ತಿದೆ. ಮೊದಲನೆಯ ತನಿಖೆಯು ಸ್ಫೋಟಗೊಂಡಿದ್ದ ಬಾಂಬ್‌ಗೆ ಸಂಬಂಧಿಸಿದ್ದಾದರೆ, ಇನ್ನೊಂದು ಸ್ಫೋಟಿಸದೆ ಉಳಿದ ಬಾಂಬ್‌ನ ಕುರಿತಾಗಿದೆ.

ಮಕ್ಕಾ ಮಸೀದಿಯಲ್ಲಿ ಸ್ಫೋಟಿಸಿದ್ದ ಸ್ಫೋಟಕವಸ್ತುವಿಗೆ ಸಂಬಂಧಿಸಿ ಸಿಬಿಐ ತನಿಖೆಯನ್ನು ಆರಂಭಿಸಿದೆ. ಆದಾಗ್ಯೂ ಹೈದರಾಬಾದ್ ಪೊಲೀಸರು ತಾವು ಪತ್ತೆಹಚ್ಚಿದ ಸ್ಫೋಟಿಸದೆ ಉಳಿದ ಬಾಂಬ್‌ನ ಬಗ್ಗೆ ತನಿಖೆಯನ್ನು ಈಗಲೂ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ಸಹ ಸಿಬಿಐಗೆ ಹಸ್ತಾಂತರಿಸುವಂತೆ ಅವರ ಮೇಲೆ ಬಲವಾದ ಒತ್ತಡವನ್ನು ಹೇರಲಾಗುತ್ತಿದೆ ಯಾದರೂ, ಈವರೆಗೆ ಏನೂ ಪ್ರಯೋಜನವಾಗಿ ಲ್ಲವೆಂದು ಆಂತರಿಕ ಮೂಲಗಳು ತಿಳಿಸಿವೆ.

ಹೈದರಾಬಾದ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಅನ್ಯಾಯವಾಗಿ ಬಂಧಿಸಲ್ಪಟ್ಟಿರುವ ಅಮಾಯಕ ಮುಸ್ಲಿಂ ಯುವಕನೊಬ್ಬನ ಪರವಾಗಿ ಹೋರಾಡುತ್ತಿರುವ ಮಾನವಹಕ್ಕುಗಳ ಚಳವಳಿಗಾರರು ಕೂಡಾ, ಒಂದು ಪ್ರಕರಣವನ್ನು ಸಿಬಿಐಗೂ ಇನ್ನೊಂದನ್ನು ಸ್ಥಳೀಯ ಪೊಲೀಸರೂ ನಿರ್ವಹಿಸುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಾಂಬ್ ಗಳನ್ನು ಒಂದೇ ದಿನ ಒಂದೇ ಉದ್ದೇಶಕ್ಕಾಗಿ ಒಂದೇ ಸ್ಥಳದಲ್ಲಿ ಇರಿಸಲಾಗಿತ್ತು. ಹಾಗಾಗಿ ಪ್ರಕರಣ ವನ್ನು ಸಿಬಿಐಯೇ ಏಕಾಏಕಿಯಾಗಿ ತನಿಖೆ ಮಾಡಬೇಕೆಂದು ಅವರು ಪ್ರತಿಪಾದಿಸಿದ್ದಾರೆ.

ಆದಾಗ್ಯೂ ಹೈದರಾಬಾದ್ ಪೊಲೀಸರು ಪ್ರಕರಣವನ್ನು ಹಸ್ತಾಂತರಿಸಲು ಒಪ್ಪುತ್ತಿಲ್ಲ. ತಾವು ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುತ್ತಿರುವುದಾಗಿ ಸಬೂಬು ಹೇಳುತ್ತಿದ್ದಾರೆ. ಆದರೆ ತನಿಖೆಯಲ್ಲಿ ಹೆಚ್ಚೇನೂ ಪ್ರಗತಿಯಾಗಿರುವುದು ಕಂಡುಬರುತ್ತಿಲ್ಲ. ಇದೀಗ ಪೊಲೀಸರು ಅದನ್ನು ತಟಸ್ಥವಾಗಿರಿಸಿದ್ದಾರೆ.

ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಪೊಲೀಸ್ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಹೀಗಿದ್ದರೂ ಸಹ ಹೈದರಾಬಾದ್ ಪೊಲೀಸರು ಪ್ರಕರಣವನ್ನು ಈವರೆಗೆ ತಮ್ಮಲ್ಲಿಯೇ ಉಳಿಸಿಕೊಂಡಿರುವುದು ಅಚ್ಚರಿಕರ. ಇದೀಗ ಈ ಪ್ರಕರಣದ ತನಿಖೆಯನ್ನು ತನಗೆ ವಹಿಸಬೇಕೆಂದು ಕೋರಿ ಸಿಬಿಐನಿಂದ ವಿಧ್ಯುಕ್ತವಾಗಿ ಪತ್ರ ಬರುವುದನ್ನು ಅವರು ನಿರೀಕ್ಷಿಸುತ್ತಿದ್ದಾರೆಂದು ಕೆಲವು ಮೂಲಗಳು ಹೇಳಿವೆ.

ಆದಾಗ್ಯೂ ಸಿಬಿಐ ಸದ್ಯಕ್ಕೆ ತಾನು ಸ್ಫೋಟಗೊಂಡ ಬಾಂಬ್ ಬಗ್ಗೆ ಮಾತ್ರ ತನಿಖೆ ನಡೆಸುವುದಾಗಿ ಹೇಳಿದೆ. ಈ ನಿಟ್ಟಿನಲ್ಲಿ ಅಸೀಮಾನಂದ ನೀಡಿದ ತಪ್ಪೊಪ್ಪಿಗೆ ಹೇಳಿಕೆಯು ದೊಡ್ಡ ಮಟ್ಟದಲ್ಲಿ ನೆರವಾಗಿದೆ. ಮಕ್ಕಾ ಮಸೀದಿಯಲ್ಲಿ ಯಾರು ಬಾಂಬಿರಿಸಿದರು ಹಾಗೂ ದಾಳಿಯನ್ನು ನಡೆಸಲು ಅವರಿಗೆ ಯಾರು ವ್ಯವಸ್ಥೆ ಮಾಡಿದರು ಹಾಗೂ ಸ್ಥಳೀಯರು ನೆರವನ್ನು ನೀಡಿದರು ಎಂಬ ಎರಡು ಅಂಶಗಳ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.

ಸ್ಫೋಟಕ್ಕೆ ನೆರವು ನೀಡಿದವರು ಯಾರು?

ಅಸೀಮಾನಂದ ಸಿಬಿಐ ಅಧಿಕಾರಿಗಳು ತಮ್ಮ ತನಿಖೆಯನ್ನು ಮುನ್ನಡೆಸುವುದಕ್ಕೆ ಕಾರಣನಾಗಿದ್ದಾನೆ. ಆದರೆ ನಿಗೂಢವಾಗಿ ಕೊಲೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಸುನೀಲ್ ಜೋಶಿ ಹಾಗೂ ಆತನ ಸಹಚರರಾದ ಸಂದೀಪ್ ಡಾಂಗೆ ಹಾಗೂ ರಾಮ್‌ಜಿ ಕಲ್ಸಂಗ್ರಾ, ಬಿಹಾರ್ ದೇವೇಂದ್ರ ಗುಪ್ತಾ ಹಾಗೂ ಲೋಕೇಶ್ ಗುಪ್ತಾ ಅವರಿಗೆ ಈ ಪ್ರಕರಣದ ಜೊತೆ ಸಂಬಂಧವನ್ನು ಬಯಲಿಗೆಳೆ ಯುವುದು ಅದರ ಮುಂದಿರುವ ಅತಿ ದೊಡ್ಡ ಸವಾಲಾಗಿದೆ.

ಸಿಬಿಐ ಡಿಸೆಂಬರ್ 18ರಂದು ಗುಪ್ತಾ, ಶರ್ಮಾ ಹಾಗೂ ಜೋಶಿ ವಿರುದ್ಧ ಹೈದರಾಬಾದ್‌ನ ನ್ಯಾಯಾಲಯವೊಂದರಲ್ಲಿ ದೋಷಾ ರೋಪ ಪಟ್ಟಿಯನ್ನು ಸಲ್ಲಿಸಿತು. ಈಗ ಭೂಗತರಾಗಿರುವ ಡಾಂಗೆ ಹಾಗೂ ಕಲ್ಸಂಗ್ರಾನನ್ನು ಕೂಡಾ ಚಾರ್ಜ್‌ಶೀಟ್ ಹೆಸರಿಸಿದೆ.

ಈ ಮೂವರು ವ್ಯಕ್ತಿಗಳು ಹೈದರಾಬಾದ್‌ನವರಲ್ಲ. ಹಾಗಾಗಿ ಅವರು ಸ್ಥಳೀಯರ ನೆರವಿಲ್ಲದೆ ಈ ದಾಳಿಯನ್ನು ನಡೆಸಿರುವುದು ಅಸಾಧ್ಯವೆಂದು ಸಿಬಿಐ ಮೂಲಗಳು ಹೇಳಿವೆ.

ಸಿಬಿಐ ಕಸ್ಟಡಿಯಲ್ಲಿರುವ ಗುಪ್ತಾ, ತಮಗೆ ಸ್ಥಳೀಯರ ಬೆಂಬಲ ವಿರುವ ಬಗ್ಗೆ ಯಾವುದೇ ಬಗ್ಗೆ ತನಿಖಾಧಿಕಾರಿ ಗಳಿಗೆ ನೀಡಿಲ್ಲ. ಅದಕ್ಕೂ ಹೆಚ್ಚಾಗಿ ಈ ವಿಷಯವಾಗಿ ಮಾಹಿತಿಗಳನ್ನು ಸಂಗ್ರಹಿಸಲು ಹೈದರಾಬಾದ್ ಪೊಲೀಸರಿಗೆ ಇದುವರೆಗೆ ಸಾಧ್ಯವಾಗಿಲ್ಲ.

ರಾಷ್ಟ್ರಧ್ವಜದ ದುರುಪಯೋಗಕ್ಕೆ ಅವಕಾಶ ಬೇಡ




ಅನಗತ್ಯ ವಿವಾದಗಳನ್ನು ಕೆರಳಿಸಿ ತಿಳಿ ನೀರಿನಲ್ಲಿ ಕಲ್ಲೆಸೆದು ರಾಡಿ ಎಬ್ಬಿಸುವುದು ಬಿಜೆಪಿ ಸೇರಿದಂತೆ ಸಂಘಪರಿವಾರ ಸಂಘಟನೆಗಳ ಜಾಯಮಾನ. ಅಯೋಧ್ಯೆ ಯಿಂದ ಹಿಡಿದು ಬಾಬಾಬುಡಾನ್‌ಗಿರಿ ವರೆಗೆ ಅವು ನಡೆಸುತ್ತಾ ಬಂದುದು ಇಂತಹ ದುಸ್ಸಾಹಸವನ್ನೇ. ತನ್ನ ದುಷ್ಟ ಕೋಮುವಾದಿ ರಾಜಕೀಯ ಉದ್ದೇಶಗಳಿಗಾಗಿ ಅದು ರಾಷ್ಟ್ರೀಯ ಸಂಕೇತಗಳನ್ನು ಬಳಸಿಕೊಳ್ಳುತ್ತಾ ಬಂದಿದೆ. ಭಾರತದ ರಾಷ್ಟ್ರೀಯತೆಯ ಗುತ್ತಿಗೆ ಹಿಡಿದಂತೆ ಅದು ಉದ್ಧಟತನದಿಂದ ವರ್ತಿಸುತ್ತಿದೆ. ಇದೀಗ ಅದರ ಕಣ್ಣು ಕಾಶ್ಮೀರದ ಲಾಲ್‌ಚೌಕದ ಮೇಲೆ ಬಿದ್ದಿದೆ. ಗಣರಾಜ್ಯೋತ್ಸವದ ದಿನ ಅಲ್ಲಿ ರಾಷ್ಟ್ರಧ್ಜಜ ಹಾರಿಸುವ ಹುನ್ನಾರ ನಡೆಸಿದೆ.

ಈ ಹಿಂದೆ ಅಡ್ವಾಣಿಯವರು ಆಯೋಧ್ಯೆಗೆ ರಥಯಾತ್ರೆ ನಡೆಸಿ ಅಲ್ಲಿ ಅನಾಹುತಕ್ಕೆ ಕಾರಣರಾದರು. ಆಗ ಸಹೋದ್ಯೋಗಿ ಮುರಳಿ ಮನೋಹರ್ ಜೋಷಿ ಕಾಶ್ಮೀರದ ಲಾಲ್‌ಚೌಕದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಸಾಹಸ ನಡೆಸಿದರು. ಕೇಂದ್ರದಲ್ಲಿ ಅಧಿಕಾರ ದೊರೆತ ನಂತರ ಈ ಕಾರ್ಯಕ್ರಮಗಳನ್ನು ಕೈಬಿಟ್ಟಿದ್ದ ಬಿಜೆಪಿ ಈ ವರ್ಷ ಮತ್ತೆ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮುಂಬರುವ ಲೋಕಾಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಹಗರಣಗಳಿಂದ ಕಳೆದುಹೋಗುತ್ತಿರುವ ತನ್ನ ಮಾನವನ್ನು ಮುಚ್ಚಿಕೊಳ್ಳಲು ರಾಷ್ಟ್ರಧ್ವಜವನ್ನು ಹಾರಿಸುವ ಹುನ್ನಾರ ನಡೆಸಿದೆ. ಇದರಿಂದ ಕಾಶ್ಮೀರದಲ್ಲಿ ಉರಿಯುವ ಬೆಂಕಿಗೆ ತೈಲ ಸುರಿದಂತಾಗಿದೆ.

ಭಾರತದ ಅವಿಭಾಜ ಅಂಗವಾಗಿರುವ ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಲು ಯಾರದೇ ಅಭ್ಯಂತರವಿಲ್ಲ. ಅಲ್ಲಿನ ಚುನಾಯಿತ ಸರಕಾರವೇ ಪ್ರತಿ ವರ್ಷ ಆ ಕೆಲಸವನ್ನು ಮಾಡುತ್ತಿದೆ. ಈ ವರ್ಷದ ಗಣರಾಜ್ಯೋತ್ಸವದಂದು ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಧ್ವಜಾರೋಹಣ ಮಾಡುತ್ತಾರೆ. ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಉಸಾಬರಿ ಬಿಜೆಪಿಗೆ ಬೇಕಾಗಿರಲಿಲ್ಲ. ಅದಕ್ಕೆ ಬೇಕಾಗಿರುವುದು ಕೋಮು ಕಿಡಿ ಹಚ್ಚುವುದಾಗಿದೆ. ಭಾರತದ ರಾಷ್ಟ್ರಧ್ವಜದ ಮೇಲೆ ಸಂಘಪರಿವಾರಕ್ಕೆ ಎಷ್ಟು ನಿಷ್ಠೆ ಮತ್ತು ಗೌರವವಿದೆ ಎಂಬುದು ಅದರ ಐದು ದಶಕಗಳ ನಡೆಯಿಂದಲೇ ಗೊತ್ತಾಗುತ್ತದೆ.

ಭಾರತದ ಸ್ವಾತಂತ್ರವನ್ನು ಮತ್ತು ರಾಷ್ಟ್ರಧ್ವಜವನ್ನು ಭಾರತೀಯರ ಹೆಮ್ಮೆಯ ಸಂಕೇತವೆಂದು ಆರೆಸ್ಸೆಸ್ ಎಂದೂ ಒಪ್ಪಿಕೊಂಡಿಲ್ಲ. ಬಿಜೆಪಿಯ ಆತ್ಮವಾಗಿರುವ ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಚೇರಿಯ ಮೇಲೆ ಹಾರುತ್ತಿರುವುದು ರಾಷ್ಟ್ರಧ್ವಜವಲ್ಲ, ಅದು ಭಗವಾಧ್ವಜ. ಸ್ವಾತಂತ್ರ ಮತ್ತು ಗಣರಾಜ್ಯೋತ್ಸವ ದಿನಗಳನ್ನು ಈ ಪರಿವಾರ ಎಂದೂ ಸಂಭ್ರಮದಿಂದ ಆಚರಿಸಿಲ್ಲ. ಆದರೆ ಸಾಮಾಜಿಕ ಶಾಂತಿಯನ್ನು ಕದಡಲು ಈ ರಾಷ್ಟ್ರೀಯ ಸಂಕೇತಗಳನ್ನು ಬಳಸಿಕೊಳ್ಳುತ್ತಾ ಬಂದಿದೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರೋತ್ಸವದ ದಿನ ರಾಷ್ಟ್ರಧ್ವಜ ಹಾರಿಸುವ ಪ್ರಚೋದನಕಾರಿ ಕಾರ್ಯಕ್ರಮವನ್ನು ಸಂಘಪರಿವಾರ 90ರ ದಶಕದಲ್ಲಿ ಹಾಕಿಕೊಂಡಿತು. ಇದರಿಂದ ಹುಬ್ಬಳ್ಳಿ ಮತ್ತು ಧಾರವಾಡ ಮಾತ್ರವಲ್ಲ ಇಡೀ ಉತ್ತರ ಕರ್ನಾಟಕದಲ್ಲಿ ಉದ್ರಿಕ್ತ ವಾತಾವರಣ ಉಂಟಾಯಿತು. ಇವರ ರಾಜಕೀಯ ಸ್ವಾರ್ಥ ಸಾಧನೆಗಾಗಿ ಐವರು ಮುಗ್ಧ ನಾಗರಿಕರು ಗುಂಡಿಗೆ ಬಲಿಯಾಗ ಬೇಕಾಯಿತು. ಇದರಿಂದ ಲಾಭ ಪಡೆದುದು ಬಿಜೆಪಿ. ಆ ಪಕ್ಷದ ಪ್ರಹ್ಲಾದ್ ಜೋಷಿ ಲೋಕಸಭೆಗೆ ಮತ್ತು ಜಗದೀಶ್ ಶೆಟ್ಟರ್ ವಿಧಾನಸಭೆಗೆ ಆರಿಸಿ ಬಂದರು
.

ಈ ರೀತಿ ಸ್ವಾರ್ಥ ಸಾಧನೆಗೆ ರಾಷ್ಟ್ರಧ್ವಜವನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಯಾವುದೇ ಸಂಘಟನೆಗೆ ಅವಕಾಶ ನೀಡಬಾರದು. ಈ ಸಂಬಂಧದಲ್ಲಿ ಸುಪ್ರೀಂ ಕೋರ್ಟ್ 2004ರ ಸೆಪ್ಟಂಬರ್ 13ರಂದು ನೀಡಿದ ತೀರ್ಪಿನ ಪ್ರಕಾರ ರಾಷ್ಟ್ರಧ್ವಜದ ಹೆಸರಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಯಾರಿಗೂ ಅವಕಾಶ ಮಾಡಿ ಕೊಡಬಾರದು. ಕೇಂದ್ರ ಸರಕಾರ ಇಂತಹ ಪ್ರಚೋದನಕಾರಿ ಕಾರ್ಯಕ್ರಮ ಗಳನ್ನು ನಿಷೇಧಿಸಬೇಕಾಗಿದೆ. ಸ್ವಾತಂತ್ರೋತ್ಸವ ಮತ್ತು ಗಣರಾಜ್ಯೋತ್ಸವ ದಿನಗಳು ಭಾರತದ ನೂರು ಕೋಟಿ ಜನರ ಹೆಮ್ಮೆಯ ದಿನಗಳಾಗಿವೆ.

ಈ ದಿನಗಳನ್ನು ಯಾರು ಬೇಕಾದರೂ ಸಂಭ್ರಮದಿಂದ ಆಚರಿಸಬಹುದು. ಆದರೆ ಉದ್ದೇಶ ಪೂರ್ವಕವಾಗಿ ಅದೇ ದಿನದಂದು ಹಿಂಸೆಯನ್ನುಂಟು ಮಾಡುವ ಕಾರ್ಯಕ್ರಮ ನಡೆಸಲು ಯಾರಿಗೂ ಅವಕಾಶ ನೀಡಬಾರದು. ಜನರ ಬದುಕಿಗೆ ಕೊಳ್ಳಿ ಇಡಲು ರಾಷ್ಟ್ರಧ್ವಜವನ್ನು ಬಳಸಿಕೊಳ್ಳುವುದು ಹೇಯ ಅಪರಾಧವಾಗಿದೆ. ಬಿಜೆಪಿಯ ರಾಷ್ಟ್ರಪ್ರೇಮ ಎಂತಹದು ಎಂಬುದು ಗೊತ್ತಿರುವ ಜನ ಅದರ ವ್ಯರ್ಥ ಪ್ರಹಸನಕ್ಕೆ ಮೋಸ ಹೋಗುವುದಿಲ್ಲ.

ಬಿಜೆಪಿಯ ಕೇಂದ್ರ ನಾಯಕರ ನೀರಾ ರಾಡಿಯಾ ಹಗರಣ ಹಾಗೂ ಕರ್ನಾಟಕದ ಬಿಜೆಪಿ ಸರಕಾರದ ಭೂ ಹಗರಣ ಮತ್ತು ಗಣಿ ಹಗರಣಗಳನ್ನು ಮುಚ್ಚಿಕೊಳ್ಳಲು ಹಾಗೂ ಮತ್ತೆ ಅಧಿಕಾರಕ್ಕೆ ಬರಲು ಕಾಶ್ಮೀರದ ಲಾಲ್ ಚೌಕದಲ್ಲಿ ಧ್ವಜಾರೋಹಣದ ವಂಚನೆಯ ಪ್ರಹಸನವನ್ನು ಬಿಜೆಪಿ ನಡೆಸಿದೆ. ಈ ರಾಷ್ಟ್ರ ಘಾತಕ, ವಂಚಕ ಶಕ್ತಿಗಳಿಂದ ರಾಷ್ಟ್ರಧ್ವಜದ ರಕ್ಷಣೆ ತುರ್ತು ಅಗತ್ಯವಾಗಿದೆ.
ಸಂಪಾದಕೀಯ ವರ್ತಾ ಭಾರತಿ ಶನಿವಾರ , 22 ಜನವರಿ 2011

ಈಗ ಪ್ರಾಯಶ್ಚಿತ್ತ ಕಾಲ!


ಮಾಲೆಗಾಂವ್, ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟ ಘಟನೆಗಳು ನಡೆದು ಮೂರು ವರ್ಷಗಳೇ ಸಂದರೂ ಈ ಪ್ರಕರಣಗಳ ನಿಗೂಢತೆಯು ದಿನದಿಂದ ದಿನಕ್ಕೆ ದಟ್ಟವಾಗುತ್ತಲೇ ಹೋಗುತ್ತಿತ್ತು. ಸ್ವಘೋಷಿತ ಧಾರ್ಮಿಕ ನಾಯಕ ಸ್ವಾಮಿ ದಯಾನಂದ ಪಾಂಡೆಯ ಲ್ಯಾಪ್‌ಟಾಪ್ ನಿಂದ ಆಡಿಯೋ ಟೇಪ್‌ಗಳನ್ನು ವಶಪಡಿಸಿ ಕೊಂಡ ಬಳಿಕ ಈ ದುಷ್ಕೃತ್ಯಗಳಲ್ಲಿ ಕೇಸರಿ ಭಯೋತ್ಪಾದಕರ ಕೈವಾಡವಿರುವ ಬಗ್ಗೆ ಬಲವಾದ ಸಂಶಯಗಳು ಮೂಡಿದ್ದವು. ಆದರೆ ಇತ್ತೀಚೆಗೆ ತೀಸ್ ಹಝಾರಿ ನ್ಯಾಯಾಲಯದಲ್ಲಿ ಸ್ಫೋಟ ಪ್ರಕರಣಗಳ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ನೀಡಿದ ತಪ್ಪೊಪ್ಪಿಗೆಯು ಹಲವು ತಿಂಗಳುಗಳಿಂದ ಹೊಗೆಯಾಡುತ್ತಿದ್ದ ಊಹಾಪೋಹಗಳಿಗೆ ಕಾನೂನಿನ ಅಂದಕಾರದ ಮುದ್ರೆಯನ್ನೊತ್ತಿತು.




ಮಾಲೆಗಾಂವ್ (2006 ಹಾಗೂ 08), ಸಂಜೋತಾ ಎಕ್ಸ್‌ಪ್ರೆಸ್ (2007), ಅಜ್ಮೀರ್ ಶರೀಫ್ (2007) ಹಾಗೂ ಮಕ್ಕಾ ಮಸೀದಿ (2007) ಸ್ಫೋಟ ಸೇರಿದಂತೆ ದೇಶಾದ್ಯಂತ ನಡೆದ ಹಲವು ಸರಣಿ ಬಾಂಬ್ ಸ್ಫೋಟಗಳಲ್ಲಿ ಹಿಂದುತ್ವವಾದಿ ಉಗ್ರರ ಕೈವಾಡವಿರುವುದು ಈಗ ನಿಚ್ಚಳವಾಗಿ ಬಯಲಾಗಿದೆ.

ಆದಾಗ್ಯೂ, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ನಮ್ಮ ಪೊಲೀಸರು ಈ ಪ್ರಕರಣಗಳ ತನಿಖೆಯ ಲ್ಲಿಯೂ ಅನುಸರಿಸಲು ಮರೆತಿ ರಲಿಲ್ಲ. ಈ ಸ್ಫೋಟ ಪ್ರಕರಣಗಳ ತನಿಖೆಗೆ ಸಂಬಂಧಿಸಿ ಡಜನ್ ಗಟ್ಟಲೆ ಅಮಾಯಕ ಮುಸ್ಲಿಂ ಯುವಕರನ್ನು ಪೊಲೀಸರು ತಿಂಗಳುಗಟ್ಟಲೆ ಬಂಧಿಸಿ,ಅವರ ಮೇಲೆ ದೌರ್ಜನ್ಯ ವೆಸಗಿದ್ದಾರೆ ಹಾಗೂ ಅವರ ವಿರುದ್ಧ ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದ್ದಾರೆ. ಮಾತ್ರವಲ್ಲ ಬಂಧಿತ ಮುಸ್ಲಿಂ ಯುವಕರಿಗೆ ಚಿತ್ರಹಿಂಸೆ ನೀಡಿ, ಅವರಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆದುಕೊಳ್ಳುವುದಕ್ಕೂ ಪೊಲೀಸರು ಹೇಸಲಿಲ್ಲ. ಮಹಾರಾಷ್ಟ್ರ ಹಾಗೂ ಆಂಧ್ರ ಪೊಲೀಸರು ಉದ್ದೇಶಪೂರ್ವಕ ವಾಗಿಯೇ ಈ ಪ್ರಕರಣಗಳನ್ನು ‘ಹಿಂದುತ್ವವಾದಿ ಭಯೋ ತ್ಪಾದನೆ’ಯ ಆಂಗಲ್‌ನಿಂದ ನೋಡಲು ನಿರಾಕರಿಸಿದರು. ಬದಲಾಗಿ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿ, ಜೈಲಿಗೆ ತಳ್ಳ ತೊಡಗಿದರು.

ದೇಶದಲ್ಲಿ ಕೇಸರಿ ಭಯೋ ತ್ಪಾದನೆಯ ಕಾಳಸರ್ಪ ಹೆಡೆಯೆತ್ತಿರುವುದನ್ನು ಪ್ರಪ್ರಥಮ ಬಾರಿಗೆ ಪತ್ತೆಹಚ್ಚಿದ ಕೀರ್ತಿ 26/11ರ ಮುಂಬೈ ದಾಳಿಯ ಸಂದರ್ಭದಲ್ಲಿ ಹತರಾದ ಆಗಿನ ಎಟಿಎಸ್ ವರಿಷ್ಠ ಹೇಮಂತ್ ಕರ್ಕರೆಯವರಿಗೆ ಸಲ್ಲಬೇಕು. ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೆತ್ತಿಕೊಂಡ ಅವರಿಗೆ ಪ್ರಕರಣದಲ್ಲಿ ಕೇಸರಿ ಭಯೋತ್ಪಾದಕರ ಕೈವಾಡವಿರುವುದು ಸ್ಪಷ್ಟವಾಯಿತು. ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿದ್ದ ಹೈದರಾಬಾದ್ ಪೊಲೀಸರನ್ನು ಸಂಪರ್ಕಿಸಿದ ಅವರು, ಮಾಲೆಗಾಂವ್ ಸ್ಫೋಟದ ಬಂಧಿತ ಉಗ್ರ, ಕ. ಪುರೋಹಿತ್ 2006ರಲ್ಲಿ ಜಮ್ಮುವಿನಲ್ಲಿ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿ ದ್ದಾಗ, ಅಲ್ಲಿರುವ ಮಿಲಿಟರಿ ಸಂಶೋಧನಾ ಕೇಂದ್ರದಿಂದ ಆರ್‌ಡಿಎಕ್ಸ್ ಸಂಪಾದಿಸಿದ್ದನೆಂಬುದಾಗಿ ಮಾಹಿತಿ ನೀಡಿದರು. ಆದರೆ ಹೈದರಾಬಾದ್ ಪೊಲೀಸರು ಮಾತ್ರ ಕರ್ಕರೆ ಮಾತಿಗೆ ಕವಡೆ ಕಿಮ್ಮತ್ತನ್ನೂ ನೀಡಲಿಲ್ಲ. ಮಾತ್ರವಲ್ಲ 70ಕ್ಕೂ ಅಧಿಕ ಮುಸ್ಲಿಂ ಯುವಕರನ್ನು ವಶಕ್ಕೆ ತೆಗೆದುಕೊಂಡು ಅವರಿಗೆ ಖಾಸಗಿ ವ್ಯಕ್ತಿಗಳ ಫಾರ್ಮ್‌ಹೌಸ್‌ಗಳಲ್ಲಿ ಚಿತ್ರಹಿಂಸೆ ನೀಡಿದರು ಹಾಗೂ ಅವರಿಂದ ಬಲಾತ್ಕಾರವಾಗಿ ತಪ್ಪೊಪ್ಪಿಗೆ ಹೇಳಿಕೆಗಳನ್ನು ಪಡೆದುಕೊಂಡರು. ಇಷ್ಟಕ್ಕೂ ಕ. ಪುರೋಹಿತ್‌ನನ್ನು ತಮ್ಮ ಕಸ್ಟಡಿಗೆ ತೆಗೆದುಕೊಳ್ಳಬೇಕೆಂಬ ಯೋಚನೆ ಅವರಿಗೆ ಬರಲೇ ಇಲ್ಲ.

ಇನ್ನು ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದ ತನಿಖೆ ನಡೆ ಸಿದ ಹರ್ಯಾಣ ಎಟಿಎಸ್‌ನದು ಬೇರೆಯೇ ಕಥೆ. ದಯಾ ನಂದ ಪಾಂಡೆಯನ್ನು ನೆಪಮಾತ್ರಕ್ಕೆ ಪ್ರಶ್ನಿಸಿದ ಬಳಿಕ ಅದು ಪ್ರಕರಣವನ್ನು ಭೇದಿಸಲು ಅಸಾಧ್ಯವಾಗಿದೆಯೆಂದು ಹೇಳಿ ಕೈತೊಳೆದುಕೊಂಡಿತ್ತು. ಸಂಜೋತಾ ಸ್ಫೋಟದಲ್ಲಿ ಆರ್ ಡಿಎಕ್ಸ್ ಬಳಕೆಯು, ಈ ದುಷ್ಕೃತ್ಯದಲ್ಲಿ ಪಾಕ್ ಕೈವಾಡವಿದೆ ಯೆಂಬುದಕ್ಕೆ ಪ್ರಬಲವಾದ ಪುರಾವೆಯೆಂದು ತನಿಖಾ ಸಂಸ್ಥೆ ಗಳು, ಮಾಧ್ಯಮಗಳು ಡಂಗುರ ಸಾರಿದ್ದವು. ಆದರೆ ಈ ಬಾಂಬನ್ನು ಒಯ್ಯುತ್ತಿದ್ದ ಸೂಟ್‌ಕೇಸನ್ನು ಇಂದೋರ್‌ನ ಕೊಠಾರಿ ಮಾರುಕಟ್ಟೆಯಲ್ಲಿ ಖರೀದಿಸಲಾಗಿತ್ತೆಂಬ ಮಹತ್ವದ ಸುಳಿವು ಲಭಿಸಿದ್ದರೂ, ಆ ಬಗ್ಗೆ ಎಟಿಎಸ್ ತಲೆಕೆಡಿಸಿಕೊಳ್ಳ ಲೇ ಇಲ್ಲ. ಪ್ರಕರಣದ ತನಿಖೆಯನ್ನು ಕೈಬಿಡುವುದಕ್ಕೆ ಒಂದೋ ಹರ್ಯಾಣ ಎಟಿಎಸ್‌ಗೆ ಕಾಣದ ಕೈಗಳಿಂದ ಒತ್ತಡವಿತ್ತೇ ಅಥವಾ ಹಿಂದುತ್ವವಾದಿ ಉಗ್ರರ ಕೈವಾಡದ ಸಾಧ್ಯತೆಯಿರು ವುದು ಅರಿವಾದ ಬಳಿಕ ಅವರು ತನಿಖೆಗೆ ಹಿಂದೇಟು ಹಾಕಿದರೇ ಎಂಬುದು ಇನ್ನೂ ಬಿಡಿಸಲಾಗದ ಒಗಟಾಗಿದೆ.

ಈ ಕಾಮಾಲೆಗೆ ಮದ್ದೆಲ್ಲಿ?

ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿದೆಯಾದರೂ, ತನಿಖೆಯ ಮೇಲೆ ತಮ್ಮ ಹಿಡಿತವನ್ನು ಇನ್ನೂ ಇಟ್ಟುಕೊಳ್ಳುವ ಉದ್ದೇಶದೊಂದಿಗೆ ಹೈದರಾಬಾದ್ ಪೊಲೀಸರು, ಸ್ಫೋಟ ಸಂಚಿಗೆ ಸಂಬಂಧಿಸಿ ಇನ್ನೂ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಬಾಂಬ್ ಸ್ಫೋಟಗಳು ಹಾಗೂ ಭಯೋತ್ಪಾದಕ ದಾಳಿ ಪ್ರಕರಣಗಳ

ತನಿಖೆಯಲ್ಲಿ ವಿಶೇಷ ತನಿಖಾ ತಂಡ (ಸಿಟ್) ಹಾಗೂ ವಿಶೇಷ ಸೆಲ್‌ಗಳಂತಹ ತನಿಖಾ ಸಂಸ್ಥೆಗಳಿಗೆ ದೊಡ್ಡ ಲಾಭವಿರುವುದೇ ಇದಕ್ಕೆ ಮುಖ್ಯ ಕಾರಣ. ದಿqsರ್ ಆಗಿ ಪದಕಗಳನ್ನು ಸಂ


ದಯಾನಂದ ಪಾಂಡೆ


ಪಾದಿಸಲು, ಭಡ್ತಿ ಪಡೆಯಲು ಮತ್ತು ಪ್ರಶಸ್ತಿ ಗಿಟ್ಟಿಸಲು ಇದೊಂದು ರಾಜಮಾರ್ಗವಾಗಿದೆ. ಒಂದಿಷ್ಟು ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿ ನ್ಯಾಯಾಲಯ ದಲ್ಲಿ ಹಾಜರುಪಡಿದ ನಂತರ ಅವರಿಗೆ ಸಂಚುಕೋರರೆಂದು, ಪಾತಕಿಗಳ ಸಹಚರರೆಂಬ ಹಣೆಪಟ್ಟಿ ಕಟ್ಟಿದರೆ ಸಾಕು. ಆಗ ಅವರ (ದುರು) ಉದ್ದೇಶ ಈಡೇರಿದಂತೆಯೇ!.

ಈ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿ ಪ್ರಸ್ತುತ ದೇಶದ ವಿವಿಧ ಜೈಲುಗಳಲ್ಲಿ ಹಲವು ವರ್ಷಗಳಿಂದ ಬಂಧಿತರಾದವರ ಒಟ್ಟು ಸಂಖ್ಯೆಯ ಬಗ್ಗೆ ಗೃಹ ಸಚಿವಾಲಯ ಶ್ವೇತಪತ್ರ ವೊಂದನ್ನು ಹೊರಡಿಸಬೇಕಾಗಿದೆ. ಈಗಲೂ ಜೈಲುಗಳಲ್ಲಿ ಬಂಧಿಯಾಗಿರುವ ಅಮಾಯಕರನ್ನು ಯಾವುದೇ ವಿಳಂಬ ವಿಲ್ಲದೆ ಬಿಡುಗಡೆಗೊಳಿಸುವುದು ಸರಕಾರದ ತುರ್ತು ಜವಾಬ್ದಾರಿಯಾಗಿದೆ. ಹೀಗೆ ಯಾವುದೇ ಅಪರಾಧವೆಸಗದಿದ್ದರೂ, ಅನ್ಯಾಯವಾಗಿ ಜೈಲು ಸೇರಿ ಬದುಕು ನಾಶಗೊಂಡವರ,ಮಾನಸಿಕವಾಗಿ ಜರ್ಝರಿತರಾದವರ ಮತ್ತು ಸುಳ್ಳು ಆರೋಪಗಳಿಂದಾಗಿ ಸಾಮಾಜಿಕ ಕಳಂಕವನ್ನು ಹೊತ್ತುಕೊಂಡವರಿಂದ ರಾಜ್ಯ ಸರಕಾರಗಳು ಹಾಗೂ ಕೇಂದ್ರ ಗೃಹ ಸಚಿವಾಲಯ ಕ್ಷಮೆ ಯಾಚಿಸಬೇಕು. ಮಾತ್ರವಲ್ಲ ಅವರ ಬದುಕನ್ನು ಮರಳಿ ಕಟ್ಟುವ ಕಾರ್ಯವನ್ನು ಆರಂಭಿಸಬೇಕು.

ಭಯೋತ್ಪಾದಕ ಕೃತ್ಯಗಳ ಬಗ್ಗೆ ಪೊಲೀಸರಷ್ಟೇ ನಮ್ಮ ಘನವೆತ್ತ ಸಚಿವರು, ರಾಜಕಾರಣಿಗಳು ಕೂಡಾ ಪೂರ್ವಾಗ್ರಹ ಪೀಡಿತ ರಾಗಿದ್ದಾರೆಂಬುದಕ್ಕೆ ಇಲ್ಲಿ ನೀಡಿರುವ ಉದಾಹರಣೆಗಳು ಸಾಕು. ೨೦೦೯ರಲ್ಲಿ ಅಜ್ಮೀರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ೨೦೦೯ರಲ್ಲಿ ಪೊಲೀಸರು ಅಮಾಯಕರಾದ ಮೌಲವಿಗಳು ಹಾಗೂ ಮದ್ರಸ ಶಿಕ್ಷಕರನ್ನು ವಶಕ್ಕೆ ತೆಗೆದು ಕೊಂಡಾಗ ತನಿಖೆಯ ಪ್ರಗತಿಯ ಬಗ್ಗೆ ಆಗಿನ ಗೃಹ ಸಚಿವ ಶಿವರಾಜ್ ಪಾಟೀಲ್ ತೃಪ್ತಿ ವ್ಯಕ್ತಪಡಿಸಿದ್ದರು. ಅಷ್ಟೇ ಏಕೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಕೂಡಾ ಮಕ್ಕಾ ಮಸೀದಿ ಸ್ಫೋಟದ ರೂವಾರಿ ಶಹೀದ್ ಬಿಲಾಲ್‌ನ ಸಾವಿನೊಂದಿಗೆ, ಪ್ರಕರಣದ ತನಿಖೆ ಅಂತ್ಯ ಕಂಡಿದೆಯೆಂದು ಸಾರಿದ್ದರು. ತೀರಾ ಇತ್ತೀಚೆಗೆ ಪುಣೆ ಬೇಕರಿ ಸ್ಫೋಟದ ಹಿಂದೆ ಹಿಂದುತ್ವವಾದಿ ಉಗ್ರರ ಕೈವಾಡದ ಶಂಕೆಯನ್ನು ಮಹಾರಾಷ್ಟ್ರ ಎಟಿಎಸ್ ವ್ಯಕ್ತಪಡಿಸಿದಾಗ, ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್. ಪಾಟೀಲ್ ಎಟಿಎಸ್ ವರಿಷ್ಠರ ವಿರುದ್ಧ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿದ್ದರು.

ಹೀಗೆ ಅನ್ಯಾಯವಾಗಿ ಬಂಧಿಸಲ್ಪಟ್ಟು, ಪೊಲೀಸ್ ದೌರ್ಜನ್ಯ ಅನುಭವಿಸಿದವರಿಗೆ ಪರಿಹಾರ ನೀಡುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತುರ್ತು ಗಮನ ಹರಿಸಬೇಕು. ಈ ಸ್ಫೋಟ ಪ್ರಕರಣಗಳ ತನಿಖೆಯನ್ನು ಭದ್ರತಾ ಸಂಸ್ಥೆಗಳು ಹಾಗೂ ರಾಜ್ಯ ಸರಕಾರಗಳು ಹಳಿ ತಪ್ಪಿಸದಂತೆ ದೇಶದ ಜನತೆ ಕಟ್ಟೆಚ್ಚರ ವಹಿಸಬೇಕು.

ಆಸ್ಟ್ರೇಲಿಯದಲ್ಲಿ ಭಾರತೀಯ ಮೂಲದ ವೈದ್ಯ ಡಾ. ಹನೀಫ್‌ರನ್ನು ಭಯೋತ್ಪಾದನೆಯ ಸುಳ್ಳು ಆರೋಪದಲ್ಲಿ ಬಂಧಿಸಿದ್ದಕ್ಕಾಗಿ, ಅಲ್ಲಿನ ಸರಕಾರ ಸ್ವಲ್ಪವೂ ಮುಜುಗರ ಪಡದೆ ಕ್ಷಮೆಯಾಚಿಸಿತು, ಮಾತ್ರವಲ್ಲ ದೊಡ್ಡ ವೊತ್ತದ ಪರಿಹಾರ ನೀಡಿ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡಿತು. ಆಸ್ಟ್ರೇಲಿ ಯದ ಈ ನಡೆ ನಮಗೆ ಮಾದರಿಯಾಗಬೇಕು. ಆದರೆ ಮಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವರ್ಷಗಟ್ಟಲೆ ಜೈಲುಗಳಲ್ಲಿ ದಿನಗಳೆದ ಅಮಾಯಕ ಮುಸ್ಲಿಂ ಯುವಕರಿಗೆ ಆಂಧ್ರ ಸರಕಾರದ ಪುನರ್ವಸತಿ ಪ್ಯಾಕೇಜ್‌ನ ಕೊಡುಗೆ ಎಷ್ಟು ಗೊತ್ತೇ? ಕೇವಲ ೩೦ ಸಾವಿರ ರೂ. ಅವರ ಪುನರ್ವಸತಿಗೆಂದು ಘೋಷಿಸಲಾಗಿದ್ದ ಸಾಲದ ನೆರವಿನ ಯೋಜನೆ ಕೂಡಾ ಇನ್ನೂ ಕಾರ್ಯಗತಗೊಂಡಿಲ್ಲ. ತಮಗೆ ತಲಾ ೨೦ ಲಕ್ಷ ರೂ. ಪರಿಹಾರ ದೊರೆಯಬೇಕೆಂದು ಕೋರಿ ಸಂತ್ರಸ್ತರು ಸಲ್ಲಿಸಿದ ಅರ್ಜಿಗಳ ವಿರುದ್ಧ ರಾಜ್ಯ ಸರಕಾರ ಹೈದರಾಬಾದ್‌ನ ನಗರ ಸಿವಿಲ್ ಕೋರ್ಟ್‌ನಲ್ಲಿ ಕಾನೂನು ಸಮರ ನಡೆಸುತ್ತಿದೆ.

ಕಟ್ಟಕಡೆಯದಾಗಿ, ಈ ಸ್ಫೋಟ ಪ್ರಕರಣಗಳ ತನಿಖೆಯನ್ನು ಮುಚ್ಚಿಹಾಕಲು ಹಾಗೂ ತಪ್ಪುದಾರಿಗೆಳೆಯಲು ಯತ್ನಿಸಿದಂತಹ ತನಿಖಾಧಿಕಾರಿಗಳು, ರಾಜಕಾರಣಿಗಳು, ಪೊಲೀಸ್ ಅಧಿಕಾರಿ ಗಳು ಮತ್ತಿತರರ ವಿರುದ್ಧವೂ ಕಾನೂನುಕ್ರಮ ಜರಗಿಸಬೇಕು. ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಬಗ್ಗೆ ಕಸ್ಟಡಿಯಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಿದ, ಸುಳ್ಳು ಮಂಪರು ಪರೀಕ್ಷೆ ನಡೆಸಿದ ಹಾಗೂ ಅವರಿಂದ ಬಲವಂತವಾಗಿ ತಪ್ಪೊಪ್ಪಿಗೆ ಪಡೆದುಕೊಂಡ ಅಪರಾಧಗಳಿಗಾಗಿ ಹೈದರಾ ಬಾದ್‌ನ ಜಂಟಿ ಪೊಲೀಸ್ ಆಯುಕ್ತ (ಆಡಳಿತ) ಹರೀಶ್ ಗುಪ್ತಾರನ್ನು ಹೊಣೆಗಾರರನ್ನಾಗಿಸಬೇಕು. ನಿರಪರಾಧಿ ಯುವಕರನ್ನು ಹಿಂಸಿಸಿದ ಹಾಗೂ ಬಾಂಬ್ ಸ್ಫೋಟದಂತಹ ಗಂಭೀರ ಅಪರಾಧದ ತನಿಖೆಯನ್ನು ತಪ್ಪುಹಾದಿಗೆಳೆಯುವ ಮೂಲಕ, ಕರ್ತವ್ಯಚ್ಯುತಿಯೆಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ದೋಷಾರೋಪ ಹೊರಿಸಿ ವಿಚಾರಣೆ ನಡೆಸಬೇಕು. ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಅಮಾಯಕರು ಜೈಲುಯಾತನೆ ಅನುಭವಿಸುತ್ತಿರುವುದನ್ನು ಕಂಡು ಸ್ವತಃ ಪ್ರಕರಣದ ಪ್ರಧಾನ ಆರೋಪಿ ಅಸೀಮಾನಂದನ ಮನಸ್ಸೇ ಪರಿವರ್ತನೆಯಾಗಿರುವಾಗ, ನಾವು ಇಷ್ಟರವರೆಗೆ ಕಾಯ ಬೇಕಾಗಿರಲಿಲ್ಲ.

ಮಂಪರು ಪರೀಕ್ಷೆಯೆಂಬ ಕಪಟ ನಾಟಕ

ಎಪ್ರಿಲ್ ೨೦೦೮ರಲ್ಲಿ ಸಿಮಿ ಕಾರ್ಯಕರ್ತರಾದ ಸಫ್ದರ್ ನಾಗೋರಿ, ಆತನ ಸೋದರ ಕಮರುದ್ದೀನ್ ನಾಗೋರಿ ಹಾಗೂ ಅಮಿಲ್ ಪರ್ವೇಝ್ ಮೇಲೆ ನಡೆಸಲಾಯಿತೆನ್ನಲಾದ ಮಂಪರು ಪರೀಕ್ಷೆಯ ವರದಿಯು ತನಿಖಾಧಿಕಾರಿ ಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ. ಜುಲೈ 11, 2006ರ ಮುಂಬೈ ರೈಲು ಬಾಂಬ್ ಸ್ಫೋಟ ಹಾಗೂ ಜನ ವರಿ 7, 2006ರ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳನ್ನು ನಡೆಸಲು ಸಿಮಿ ಕಾರ್ಯಕರ್ತರು ನೆರವಾಗಿದ್ದರು. ಮಾತ್ರವಲ್ಲ ನೆರೆಯ ರಾಷ್ಟ್ರ ಪಾಕ್ ಪ್ರಜೆಗಳೂ ಈ ಕೃತ್ಯದಲ್ಲಿ ಭಾಗಿಗಳಾಗಿದ್ದರೆಂದು ಈ ಸೋದರರು ಮಂಪರು ಪರೀಕ್ಷೆಯ ವೇಳೆ ತಿಳಿಸಿದ್ದ ರೆಂದು ಪೊಲೀಸರು ಹೇಳಿಕೊಂಡಿದ್ದರು. ದೇಶದ ಪ್ರತಿಷ್ಠಿತ ಆಂಗ್ಲ ಪತ್ರಿಕೆ ‘ಇಂಡಿಯಾ ಟುಡೇ’ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಂಬೈ ರೈಲು ಸ್ಫೋಟ ಹಾಗೂ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಸಿಮಿ ನೇರವಾದ ಪಾತ್ರ ವಹಿಸಿದೆಯೆಂದು ಪ್ರಕಟಿಸಿಯೇ ಬಿಟ್ಟಿತು.

ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಬಾಂಬಿರಿಸಲು ಬಳಸಿದ ಸೂಟ್‌ಕೇಸನ್ನು ಪಾಕಿಸ್ತಾನದ ಕೆಲವು ವ್ಯಕ್ತಿಗಳು ಇಂದೋರ್‌ನ ಕಟಾರಿಯಾ ಮಾರುಕಟ್ಟೆಯಿಂದ ಖರೀದಿಸಿದ್ದರು. ಸೂಟ್‌ಕೇಸ್‌ನ ಕವರ್ ಹೊಲಿಯಲು ಸಿಮಿ ಕಾರ್ಯಕರ್ತನೊಬ್ಬ ನೆರವು ನೀಡಿದ್ದನೆಂದು ನಾಗೋರಿ ಬಾಯಿ ಬಿಟ್ಟಿದ್ದಾನೆಂದು ಪೊಲೀಸರು ಘೋಷಿಸಿದ್ದರು. ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲೂ ಕೆಲವು ಮುಸ್ಲಿಮರು ಶಾಮೀಲಾಗಿದ್ದ ರೆಂದು ನಾಗೋರಿ ಒಪ್ಪಿಕೊಂಡಿದ್ದ. ಇದರ ಜೊತೆಗೆ ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟದ ಹಿಂದೆ ನಾಸೀರ್ ಎಂಬವ ನಿದ್ದಾನೆಂದು ಆತ ಮಂಪರುಪರೀಕ್ಷೆ ಯಲ್ಲಿ ಹೇಳಿದ್ದನೆಂದು ಪ್ರಚಾರ ಮಾಡಲಾಗಿತ್ತು.

ಇದೀಗ ಈ ಮೂರು ಸ್ಫೋಟಗಳಲ್ಲಿ ಕೇಸರಿ ಉಗ್ರರ ಕೈವಾಡವಿರುವುದು ಜಗಜ್ಜಾಹೀರಾಗಿದ್ದು, ಈ ಮಂಪರು ಪರೀಕ್ಷೆಯು ಪೊಲೀಸರೇ ಹೆಣೆದ ಕಟ್ಟುಕಥೆಯೆಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಮಾಧ್ಯಮಗಳು ಪೊಲೀಸರ ಕೈಗೊಂಬೆಯಾದವೇ?
ಹಾಗಾದರೆ ‘ಇಂಡಿಯಾ ಟುಡೇ’ಯಂತಹ ರಾಷ್ಟ್ರೀಯ ಮಟ್ಟದ ಪತ್ರಿಕೆಯೊಂದು ಈ ಮಂಪರು ಪರೀಕ್ಷೆಯ ಸಾಚಾತನವನ್ನು ಪರಾಂಬರಿಸದೆ, ಪೊಲೀಸರು ಹೇಳಿದ್ದನ್ನೇ ಯಾಕೆ ನಂಬಿತು? ಮಾತ್ರವಲ್ಲ ಅದನ್ನೊಂದು ದೊಡ್ಡ ಸುದ್ದಿಯಾಗಿ ಯಾಕೆ ಪ್ರಕಟಿಸಿತು?. ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟದ ಬಳಿಕ ಮೂಸಾರಾಂ ಭಾಗ್‌ನಂತಹ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಂದ ಯುವಕರನ್ನು ಠಾಣೆಗೆಳೆದುಕೊಂಡು ಹೋಗಲಾ ಯಿತು.

ಪೊಲೀಸರ ಈ ಮತಿಗೇಡಿತನದ ಕೃತ್ಯಕ್ಕೆ ಸುದ್ದಿ ಮಾಧ್ಯಮಗಳು ಪ್ರಕಟಿಸಿದ ವರದಿಗಳೂ ಪರೋಕ್ಷ ಕಾರಣವಾಗಿದ್ದವು. (ಮಕ್ಕಾ ಸ್ಫೋಟದ ಹಿಂದೆ: ಆಂಧ್ರದ ರಾಜಧಾನಿಯಲ್ಲಿ ಕೋಮು ಹಿಂಸೆ, ಸಂಘಟಿತ ಅಪರಾಧ ಹಾಗೂ ಜಾಗತಿಕ ಜಿಹಾದ್‌ನ ಅಡ್ಡ ಪ್ರವೇಶ’’ ಎಂಬರ್ಥದ ಶಿರೋನಾಮೆಯ ಆಂಗ್ಲ ಲೇಖನವೊಂದು ಮೇ 23, 2007ರ ಫ್ರಂಟ್‌ಲೈನ್‌ನಲ್ಲಿ ಪ್ರಕಟವಾಗಿತ್ತು). ಇಂತಹ ವರದಿಗಳಿಂದ ಪೊಲೀಸರ ದುಂಡಾವರ್ತನೆಗಳಿಗೆ ಸಮರ್ಥನೆ ದೊರೆತಂತಾಗುತ್ತದೆ. ಅಕ್ಟೋಬರ್ 11,2007ರಲ್ಲಿ ಕೇಂದ್ರ ಗೃಹ ಸಚಿವಾಲಯವು ಹೇಳಿಕೆ ನೀಡಿ, ಅಜ್ಮೀರ್ ಶರೀಫ್ ಸ್ಫೋಟದಲ್ಲಿ ಲಷ್ಕರೆ ತಯ್ಯೆಬಾದ ಕೈವಾಡವಿದೆಯೆಂದು ತಿಳಿಸಿತು.ಲಷ್ಕರ್ ಸಂಘಟನೆಯು ಸೂಫಿ ಪಂಥವನ್ನು ಕಡುವಾಗಿ ವಿರೋಧಿಸುತ್ತಿರುವುದರಿಂದ ಆ ಪಂಥದ ಪ್ರಧಾನ ಹೆಗ್ಗುರುತುಗಳಲ್ಲೊಂದಾಗಿರುವ ಅಜ್ಮೀರ್ ದರ್ಗಾ ಶರೀಫ್‌ನ ಮೇಲೆ ಅದು ಭಯೋತ್ಪಾದಕ ದಾಳಿಯನ್ನು ನಡೆಸಿದೆಯೆಂದು ಸಚಿವಾಲಯ ತಿಳಿಸಿತ್ತು.

ಮಾರನೆಯ ದಿನವೇ ಪ್ರವೀಣ್ ಸ್ವಾಮಿ ಎಂಬ ವರದಿಗಾರ ಬರೆದ ‘‘ಜನಪ್ರಿಯ ಇಸ್ಲಾಂ ವಿರುದ್ಧ ಸಮರ’’ ಎಂಬ ಲೇಖನವೊಂದನ್ನು ‘ದಿ ಹಿಂದೂ’ ಪತ್ರಿಕೆ ಪ್ರಕಟಿಸಿತು. ಅಜ್ಮೀರ್ ದರ್ಗಾ, ಮಕ್ಕಾ ಮಸೀದಿ ಹಾಗೂ ಮಾಲೆಗಾಂವ್‌ನ ಸೂಫಿ ಮಂದಿರದ ಮೇಲೆ ನಡೆದ ಸ್ಫೋಟಗಳು ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಜನಪ್ರಿಯವಾಗಿರುವ ಸೂಫಿ ಇಸ್ಲಾಂ ವಿರುದ್ಧ ಕರ್ಮಠ ಮುಸ್ಲಿಂ ತೀವ್ರವಾದಿಗಳು ನಡೆಸಿದ ಆಕ್ರಮಣವೆಂದು ಲೇಖನ ಪ್ರತಿಪಾದಿಸಿತ್ತು. ಆದರೆ ಈ ಎರಡೂ ಲೇಖನಗಳ ಪೊಳ್ಳುತನ ಈಗ ಬಯಲಾಗಿದೆ.ಇಲ್ಲಿ ನಿಜವಾಗಿಯೂ ನಡೆದಿರುವುದು ಭಾರತದ ಧಾರ್ಮಿಕ ಸಾಮರಸ್ಯದ ವಿರುದ್ಧ ಉಗ್ರ ಹಿಂದುತ್ವವಾದಿಗಳ ದಾಳಿಯಾಗಿದೆ. ಅಜ್ಮೀರ್ ಶರೀಫ್ ದರ್ಗಾಕ್ಕೆ ಹಿಂದೂಗಳು ಕೂಡಾ ಶ್ರದ್ಧಾಭಕ್ತಿಯಿಂದ ಭೇಟಿ ನೀಡುತ್ತಿರುವುದು ಕೇಸರಿ ಉಗ್ರರ ಹೊಟ್ಟೆಯುರಿಸಿದೆ. ‘‘ಅಜ್ಮೀರ್‌ನಲ್ಲಿ ಬಾಂಬ್ ಸ್ಫೋಟಿಸಿದಲ್ಲಿ ಅಲ್ಲಿಗೆ ಹಿಂದುಗಳು ಭೇಟಿ ನೀಡಲು ಹಿಂಜರಿಯುವರು ಎಂಬ ತರ್ಕ ನಮ್ಮದಾಗಿತ್ತು’’ ಎಂದು ಆಸೀಮಾನಂದ ಮ್ಯಾಜಿಸ್ಟ್ರೇಟರ ಮುಂದೆ ನೀಡಿದ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾನೆ.

ತೀರಾ ಇತ್ತೀಚೆಗೆ, ವಾರಣಾಸಿಯಲ್ಲಿ ನಡೆದ ಬಾಂಬ್ ಸ್ಫೋಟದ ಸಂದರ್ಭದಲ್ಲೂ ಮಾಧ್ಯಮಗಳು ಪುಂಖಾನುಪುಂಖ ಲೇಖನ ಮಾಲೆಗಳನ್ನು ಹರಿಸಿದವು. ಬೇಹುಗಾರಿಕಾ ಸಂಸ್ಥೆಗಳ ಮಾಹಿತಿಯನ್ನಾಧರಿಸಿದ ಈ ಲೇಖನಗಳಲ್ಲಿ ಸ್ಫೋಟ ನಡೆಸಿದ ಇಂಡಿಯನ್ ಮುಜಾಹಿದೀನ್ ಉಗ್ರರು, ದೇಶದಿಂದ ಪರಾರಿಯಾಗಿದ್ದು ವಿದೇಶಗಳಲ್ಲಿ ತಲೆಮರಿಸಿಕೊಂಡಿದ್ದಾರೆ. ಆದರೆ ಅವರ ಸಹಚರರು ಆಝಂಘರ್ ಹಾಗೂ ಭಟ್ಕಳ ಮತ್ತಿತರ ನಗರಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆಂದು ಈ ಮಾಧ್ಯಮಗಳು ಸುಳಿವು ಕೂಡಾ ನೀಡಿದ್ದವು!.

Thursday, November 25, 2010

ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ.

ಕೊಯಂಬತ್ತೂರು ಬಾಂಬ್ ಸ್ಫೋಟದ ಆರೋಪಿ ಎಂದು ಸುಳ್ಳು ಆರೋಪ ಹೊರಿಸಲ್ಪಟ್ಟು ಕೇರಳ, ತಮಿಳುನಾಡುಗಳು ವಿವಿಧ ಬಂದೀಖಾನೆಗಳಲ್ಲಿ ಅಕ್ರಮವಾಗಿ ಬಂಧಿಯಾಗಿದ್ದ ದಮನಿತ, ಪೀಡಿತ, ಶೋಷಿತ ವರ್ಗಗಳ ಆಶಾಕಿರಣ ಐ.ಸಿ.ಯಸ್. ಅಬ್ದುಲ್ಲ ನಾಸಿರ್ ಮಅದನಿಯವರ ಬಗ್ಗೆ ಜಯಕಿರಣದಲ್ಲಿ ವಿಸ್ತಾರವಾಗಿ ಲೇಖನ ಪ್ರಕಟವಾಗಿತ್ತು. ನಾನು ಹಾಗೂ ಎಸ್.ಎಂ. ಬಶೀರ್ ಮಂಜೇಶ್ವರ ಮಅ ದನಿಯವರ ವಿರುದ್ಧ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಜಯಕಿರಣದಲ್ಲಿ ಲೇಖನ ಬರೆದಿದ್ದೆವು. ಅದುವರೆಗೆ ಮಅದನಿ ಬಗ್ಗೆ ಕರ್ನಾಟಕದ ಜನತೆಗಿದ್ದ ತಪ್ಪು ಭಾವನೆ ಆ ಮೂಲಕ ದೂರವಾಗಿತ್ತು. ಸ್ವತಃ ಮಅದನಿಯವರೇ ತನ್ನ ಬಗ್ಗೆ ನಿಷ್ಪಕ್ಷಪಾತವಾಗಿ ಬರೆದು ಜನರ ತಪ್ಪು ಕಲ್ಪನೆಗಳನ್ನು ದೂರ ಮಾಡಿದ ಜಯಕಿರಣಕ್ಕೆ ಒಂದು ಅಭಿನಂದನಾ ಪತ್ರ ಬರೆದಿದ್ದರು. ಮಅದನಿ ಜಯಕಿರಣಕ್ಕೆ ಬರೆದ ಅಭಿನಂದನಾ ಪತ್ರ ಅಂದು ಜಯಕಿರಣದ ನಿಮ್ಮಿಂದ ವಿಭಾಗದಲ್ಲಿ ಪ್ರಕಟವಾಗಿತ್ತು. ಸಂತೋಷದ ಸಂಗತಿಯೇನೆಂದರೆ ಜಯಕಿರಣದಲ್ಲಿ ಮಅದನಿ ನಿರಪರಾಧಿ ಎಂದು ಸಮಗ್ರ ಲೇಖನ ಪ್ರಕಟವಾದ ಅಲ್ಪಕಾಲದಲ್ಲೇ ತನ್ನ ನಿರಪರಾಧಿತ್ವ ಸಾಬೀತಾಗಿ ಮಅದನಿ ಬಂಧೀಖಾನೆಯಿಂದ ಬಿಡು ಗಡೆಗೊಂಡಿದ್ದರು. ಮಅದನಿ ಬಗ್ಗೆ ಸತ್ಯ ಸುದ್ದಿ ಬರೆದ ಏಕೈಕ ಪತ್ರಿಕೆ ಜಯಕಿರಣ ಎಂದು ಹಲವಾರು ಮಂದಿ ಹೇಳಿರುವುದನ್ನು ನಾನು ಕೇಳಿದ್ದೇನೆ. ಹಲವಾರು ಮಂದಿ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದರು. ಒಂದು ಪತ್ರಿಕೆಯಾಗಿ ಜಯಕಿರಣ ಅಂದು ಮಅದನಿ ಬಗ್ಗೆ ಸತ್ಯಸಂಗತಿಯನ್ನು ಕನ್ನಡಿಗರ ಮುಂದೆ ಅನಾವರಣಗೊಳಿಸಿದ್ದರಿಂದ ಜಯಕಿರಣ ಪತ್ರಿಕೆಯ ಸತ್ಯ ನಿಷ್ಠೆ, ಪ್ರಾಮಾಣಿಕತೆ ಸರ್ವರಿಗೂ ಮನವರಿಕೆಯಾಗಿತ್ತು.

ಇದೀಗ ಬೆಂಗಳೂರು ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದಾರೆಂದು ಸುಳ್ಳಾರೋಪ ಹೊರಿಸಿ ಮಅದನಿಯವರನ್ನು ಕೆಲವು ತಿಂಗಳುಗಳ ಹಿಂದೆ ಬಿ.ಎಸ್. ಯಡಿಯೂರಪ್ಪ ನಾಯಕತ್ವದ ಕರ್ನಾಟಕ ಸರಕಾರ ಬಂಧಿಸಿದೆ. ಬೆಂಗಳೂರು ಸ್ಪೋಟಕ್ಕೆ ಕೊಡಗಿನಲ್ಲಿ ಸಂಚು ರೂಪಿಸಲು ಮಅದನಿ ಸಹಕರಿಸಿ ದ್ದಾರೆಂಬುದು ಈಗ ಹೊರಿಸಲ್ಪಟ್ಟಿರುವ ಆರೋಪ ಎದ್ದು ನಡೆದಾಡಲು ಸಾಧ್ಯವಿಲ್ಲದ ಮಅದನಿ ಇತರರ ನೆರವಿನೊಂದಿಗೆ ಗಾಲಿ ಕುಚಿಯಲ್ಲಿ ಸಂಚರಿ ಸುತ್ತಾರೆ. ಕೊಯಂಬತ್ತೂರು ಸ್ಪೋಟದಲ್ಲಿ ಮಅದನಿ ಭಾಗಿಯಾಗಿಲ್ಲ ಎಂದು ನ್ಯಾಯಾಲಯ ಮಅದನಿಯವರನ್ನು ಬಿಡುಗಡೆಗೊಳಿಸಿದ ಬಳಿಕ ಮಅದನಿ ಯವರ ಕಾವಲಿಗೆ ಸದಾ ನಾಲ್ಕು ಮಂದಿ ಪೊಲೀಸರು ಜೊತೆಗಿರುತ್ತಿದ್ದರು. ಪೊಲೀಸ್ ಇಲಾಖೆಯ ಕಣ್ಗಾವಲಿನಲ್ಲಿರುವ ಮಅದನಿ ದೂರದ ಕೊಡಗಿಗೆ ಹೋಗಿ ಬೆಂಗಳೂರು ಸ್ಪೋಟದ ಸಂಚು ರೂಪಿಸಿದರು ಎಂದರೆ ಅದನ್ನು ನಂಬುವಷ್ಟು ಅವಿವೇಕಿಗಳೇ ಕೇರಳ-ಕರ್ನಾಟಕದ ಜನತೆ!? ಸುಳ್ಳಾರೊಪ ಹೊರಿಸುವುದಕ್ಕೂ ಒಂದು ಮಿತಿ ಬೇಕು. ಒಬ್ಬ ಜನನಾಯಕನೊಂದಿಗೆ ದ್ವೇಷ ಸಾಧಿಸಲು ಏನೆಲ್ಲಾ ಷಡ್ಯಂತ್ರಗಳನ್ನು ಹೂಡಿದರೆ ಅದು ನಾಗರಿಕ ಜಗತ್ತಿನ ಮುಂದೆ ಬಹಿರಂಗವಾಗದಿರುತ್ತದೆಯೇ? ಈಗ ಆದದ್ದೂ ಅಷ್ಟೆ ಗಾಲಿ ಕುರ್ಚಿಯಲ್ಲಿ ಕುಳಿತಿರುವ ಮದನಿಯವರನ್ನು ಪವಿತ್ರ ರಂಝಾನ್ ಹಬ್ಬಾಚರಣೆಗೂ ಅವಕಾಶವಿಲ್ಲದಂತೆ ವಂಚನೆಯ ಮೂಲಕ ಬಂಧಿಸಿ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರದ ಬಂಧೀಖಾನೆಯಲ್ಲಿ ವಿಚಾರಣೆಯ ನೆಪದಲ್ಲಿ ಕೂಡಿಹಾಕಲಾಗಿದೆ. ಈ ನವೆಂಬರ್ ೨೨ಕ್ಕೆ ಮದನಿ ಬಂಧನದ ಅವಧಿ ಮುಕ್ತಾಯಗೊಳ್ಳುತ್ತದೆ. ಈ ತನಕ ಮಅದನಿ ಬೆಂಗಳೂರು ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದಾರೆಂಬುದಕ್ಕೆ ಒಂದೇ ಒಂದು ತುಣುಕು ಸಾಕ್ಷ್ಯಾ ಧಾರವೂ ಲಭ್ಯವಾಗಲಿಲ್ಲ. ಬೆಂಗಳೂರು ಪೊಲೀಸ್ ಆಯುಕ್ತ ಶಂಕರ್ ಬಿದರಿ ಇದನ್ನು ಕೆಲ ತಿಂಗಳ ಹಿಂದೆಯೇ ಮಾಧ್ಯಮ ಪ್ರತಿನಿಧಿಗಳ ಮುಂದೆ ಸ್ಪಷ್ಟಪಡಿಸಿದ್ದರು. ಆದರೆ ಅಂದೇ ಪತ್ರಿಕಾಗೋಷ್ಠಿ ನಡೆಸಿದ ಅಂದಿನ ಗೃಹ ಸಚಿವ ಡಾ.ವಿ.ಎಸ್.ಆಚಾಯ್, ಮಅದನಿ ಆರೋಪಿ ಎಂದು ವ್ಯಾಖ್ಯಾನಿಸಿ ಮುಖಭಂಗಕ್ಕೀಡಾಗಿದ್ದರು. ತನಿಖೆ ನಡೆಸುತ್ತಿರುವ ಪೊಲೀ ಸರು ಮಅದನಿ ಬೆಂಗಳೂರು ಸ್ಫೋಟದಲ್ಲಿ ಭಾಗಿಯಾಗಿಲ್ಲ ಎಂದು ಮಾಧ್ಯಮದವರ ಮುಂದೆ ಸ್ಪಷ್ಟಪಡಿಸುವಾಗ, ಸರಕಾರದ ಜವಾ ಬ್ದಾರಿಯುತ ಸ್ಥಾನದಲ್ಲಿರುವವರು ಅದನ್ನು ಅಲ್ಲಗಳೆಯುವುದರ ಹಿಂದೆ ವ್ಯಾಪಕ ಷಡ್ಯಂತ್ರ ಅಡಗಿರುವುದು ರಾಜ್ಯದ ನಿಷ್ಪಕ್ಷಮತಿ, ಬುದ್ದಿವಂತ ಜನತೆಗೆ ಮನದಟ್ಟಾಗುತ್ತದೆ. ಆದರೆ ಮಅದನಿಯನ್ನು ಭಯೋ ತ್ಪಾದಕನೆಂದೂ ಬೆಂಗಳೂರು ಸ್ಫೋಟದ ಸೂತ್ರಧಾರಿಯೆಂದೂ ಬಿಂಬಿ ಸಲು ಹರಸಾಹಸಪಡುತ್ತಿರುವವರ ದೃಷ್ಟಿಯಲ್ಲಿ ಇಂದಿಗೂ ಮಅದನಿ ಅಪರಾಧಿ!

‘ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿದರೆ ಅದು ಸತ್ಯವಾಗುತ್ತದೆ ಎಂಬ ಗೋಬೆಲ್ಸ್ ಸಿದ್ದಾಂತ ಇಲ್ಲಿ ನಮಗೆ ನೆನಪಾಗುತ್ತದೆ. ಒಂದು ಸುಳ್ಳನ್ನು ಸಾವಿರ ಬಾರಿಯಲ್ಲ ಲೋಕಾಂತ್ಯದ ತನಕ ಹೇಳುತ್ತಲೇ ಇದ್ದರೂ ಸುಳ್ಳು ಸತ್ಯವಾಗುವುದಿದೆಯೇ? ಭಾರತೀಯರು ಇಷ್ಟೊಂದು ಅಧಃಪತನಕ್ಕಿಳಿಯುವರೇ? ನೈಜ ಭಾರತೀಯರಿಗೆ ಖಂಡಿತ ಹೀಗಾಗಲು ಸಾಧ್ಯವಿಲ್ಲ. ಆದ್ದರಿಂದ ಕಣ್ಣು ಮುಚ್ಚಿ ಕತ್ತಲೆ ಮಾಡುವವರ ಬಗ್ಗೆ ಜಯಕಿರಣ ಓದುಗರು ಸದಾ ಜಾಗ್ರತರಾಗಿರಬೇಕಾಗುತ್ತದೆ.

ಅಪರಾಧಕ್ಕೆ ಶಿಕ್ಷೆ ನೀಡುವ ಕಾನೂನು ಭಾರತದಲ್ಲಿದೆ. ಆದರೆ ನಿರಪರಾಧಿಗಳಿಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆ ಭಾರತದಲ್ಲಿ ನಿರಂತರ ನಡೆದಿದೆ. ನಾಸಿರ್ ಮಅದನಿ ಇಂಥಾ ಘಟನೆಗಳಿಗೆ ಜ್ವಲಂತ ನಿದರ್ಶನ. ಒಬ್ಬ ವ್ಯಕ್ತಿ ತಪ್ಪು ಮಾಡಿ ಶಿಕ್ಷೆ ಅನುಭವಿಸಿದರೆ ಅದು ನ್ಯಾಯಯುತವೇ ಆಗಿರುತ್ತದೆ. ತಪ್ಪು ಮಾಡಿದ ವ್ಯಕ್ತಿಯ ಪರವಾಗಿ ಯಾರಾದರು ಶಬ್ದ ವೆತ್ತುವುದರಲ್ಲೂ ಅರ್ಥ ಇರುವುದಿಲ್ಲ. ಆದರೆ ತಪ್ಪು ಮಾಡದೆ ನಿರಂತರ ಹಿಂಸೆ, ಶಿಕ್ಷೆ ಅನುಭವಿಸುತ್ತಿರುವ ಭಾರತದ ಪ್ರಜೆಯಾದ ಧೀರ ಹೋರಾ ಟಗಾರ ಐ.ಸಿ.ಯಸ್. ಅಬ್ದುಲ್ ನಾಸಿರ್ ಮದನಿ ಬಗ್ಗೆ ನಾವು ಅನುಕಂಪ ತೋರಿಸದಿದ್ದರೆ ನಮ್ಮಲ್ಲಿ ಮಾನವೀಯತೆ ಇದ್ದೂ ಏನು ಪ್ರಯೋಜನ. ಒಬ್ಬ ಸಹೋದರನಿಗೆ ನಿರಂತರವಾಗಿ ಅನ್ಯಾಯವಾಗುತ್ತಿರುವಾಗ ಆ ವ್ಯಕ್ತಿಯ ಪರವಾಗಿ ಧ್ವನಿಯೆತ್ತಬೇಕಾದದ್ದು ಮಾನವರಾದ ನಮ್ಮೆಲ್ಲರ ಪರಮ ಕರ್ತವ್ಯವಾಗಿದೆ. ನ್ಯಾಯದ ಪರವಾಗಿ ಧ್ವನಿಯೆತ್ತುತ್ತಿರುವುದರಲ್ಲಿ ಜಾತಿ ತಾರತಮ್ಯ ಇಲ್ಲ. ಒಂದೇ ತಂದೆ - ತಾಯಿಯ ಮಕ್ಕಳಾದ, ಏಕೋದರ ಸಹೋದರೆ-ಸಹೋದರಿಯರಾದ ನಾವೆಲ್ಲಾ ಇಂಥಾ ಪ್ರಕರಣಗಳು ನಡೆದಾಗ ಒಗ್ಗಟ್ಟಾಗಿ ಸಿಡಿದೇಳಬೇಕು. ಇದು ಮಾನವೀಯತೆಯಾಗಿದೆ. ಮಅದನಿಯವರು ಕಂಚಿನ ಕಂಠದ ತೀಕ್ಷ್ಣ ಶೈಲಿಯ ಭಾಷಣಗಾರನಾ ಗಿರಬಹುದು. ಆದರೆ ಅದು ಭಾರತದ ದುಷ್ಟ ವ್ಯವಸ್ಥೆಯ ವಿರುದ್ಧ ಮಾತ್ರವಾಗಿತ್ತು ಎಂಬ ನಗ್ನ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು.

ಭಾರತ ದೇಶದ ಸಂವಿಧಾನದ ಮೂಲಭೂತ ತತ್ವಗಳಾದ ಭ್ರಾತೃತ್ವ, ಸಹೋದರತೆ, ಸಾಮರಸ್ಯ, ರಾಷ್ಟ್ರ ಪ್ರೇಮವನ್ನು ಧ್ವಂಸಗೊಳಿಸುವವರ ವಿರುದ್ಧ ಮಅದನಿ ಬೆಂಕಿಯುಗುಳುವ ಭಾಷಣ ಮಾಡಿದ್ದಾರೆ. ಆ ಭಾಷಣಗಳು ಎಷ್ಟು ತೀಕ್ಷ್ಣವಾಗಿದ್ದವೆಂಬುದನ್ನು ತಿಳಿಯಬೇಕಾದರೆ ಮಅದನಿಯವರ ಹಿಂದಿನ ಭಾಷಣದ ಸಿಡಿಗಳನ್ನೇ ಕೇಳಬೇಕು. ಹಿಂದೂಗಳ ವಿರುದ್ಧ ಅಥವಾ ಯಾವುದೇ ಒಂದು ಜನಾಂಗದವರ ವಿರುದ್ಧ ಮಅದನಿ ಒಂದೇ ಒಂದು ಶಬ್ದವನ್ನು ಪ್ರಯೋಗಿಸಿಲ್ಲ ಎನ್ನುವುದು ಮಅದನಿಯವರ ಭಾಷಣ ಕೇಳಿದವರಿಗೆ ಹಾಗೂ ಅವರ ಕ್ರಾಂತಿಕಾರಿ ಲೇಖನಗಳನ್ನು ಓದಿದವರಿಗಷ್ಟೇ ತಿಳಿಯಬಹುದು. ದಲಿತರ ದಮನಕ್ಕೀಡಾದವರ, ಹಕ್ಕು ಕಸಿಯಲ್ಪಟ್ಟವರ ಪರವಾಗಿ ಸದಾ ತನ್ನ ಕಂಚಿನ ಕಂಠದಿಂದ ಧ್ವನಿಯೆತ್ತುತ್ತಿದ್ದ ಮಅದನಿಯವರನ್ನು ಇಂದು ದುಷ್ಟ ಆಡಳಿತ ಕೂಟ ಬೆಂಗಳೂರು ಸ್ಫೋಟದ ಸುಳ್ಳು ಆರೋಪ ಹೊರಿಸಿ ಮತ್ತೊಮ್ಮೆ ಬಂಧಿಖಾನೆಗೆ ಸೇರಿಸಿ ತನ್ನ ಕ್ರೌರ್ಯವನ್ನು ಮೆರದಿದೆ. ಹಿಂದೆ ಒಂಬತ್ತೂವರೆ ವರ್ಷಗಳ ಕಾಲ ಮಾಡದ ತಪ್ಪಿಗಾಗಿ ಬಂಧೀಖಾನೆ ಸೇರಿ ನಂತರ ನ್ಯಾಯಾಲಯದಲ್ಲಿ ನಿರಪರಾದಿ ಯೆಂದು ಸಾಬೀತಾಗಿ ಮಅದನಿಯವರು ಹೊರ ಬಂದಂತೆ ಬೆಂಗಳೂರು ಸ್ಫೋಟ ಪ್ರಕರಣದಲ್ಲೂ ಮಅದನಿ ನಿರಪರಾಧಿ ಎನ್ನುವುದು ಸೂರ್ಯ ಪ್ರಕಾಶದಂತೆ ಸ್ಪಷ್ಟ. ಮಅದನಿಯ ನಿರಪರಾಧಿತ್ವ ಸಾಬೀತಾಗಿ ಅವರು ಬಂಧೀಖಾನೆಯಿಂದ ಹೊರ ಬರುವ ದಿನವನ್ನು ನಾವು ಎದುರು ನೋಡೋಣ.

ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ.

Sunday, November 21, 2010

ಮಾಲೇಗಾಂವ್ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಸೆರೆ !!

.
ನವದೆಹಲಿ, ನ. 20 : ಅಜ್ಮೇರ್ ಷರೀಫ್, ಮೆಕ್ಕಾ ಮಸೀದಿ ಹಾಗೂ ಮಾಲೇಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರು ಎನ್ನಲಾದ ಸ್ವಾಮಿ ಅಸೀಮಾನಂದ ಅವರನ್ನು ಸಿಬಿಐ ಶುಕ್ರವಾರ ಬಂಧಿಸಿದೆ.

ಅಸೀಮಾನಂದ ಕಳೆದ ಎರಡು ವರ್ಷಗಳಿಂದ ಸಿಬಿಐ, ಮಹಾರಾಷ್ಟ್ಪ ಮತ್ತು ರಾಜಸ್ತಾನ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಒರಿಸ್ಸಾದ ಡಾಂಗ್ ಜಿಲ್ಲೆಯಲ್ಲಿ ಅಸೀಮಾನಂದ ಅವರ ಅಶ್ರಮವಿದೆ. ಅಲ್ಲಿ ತಮ್ಮ ಸಹಚರರೊಂದಿಗೆ ಭಯೋತ್ಪಾದನೆಗೆ ಸಂಬಂಧಿಸಿದಂತೆ ವಿಚಾರ, ವಿನಿಮಯ, ಸಂಚು ರೂಪಿಸುವುದು ಮತ್ತಿತರ ಕೃತ್ಯಗಳಲ್ಲಿ ತೊಡಗುತ್ತಿದ್ದರೆಂಬ ಆರೋಪದ ಅವರ ಮೇಲಿದೆ.

ಅದೇ ಪ್ರದೇಶದಲ್ಲಿ ಅಸೀಮಾನಂದ ಬುಡಕಟ್ಟು ಜನರ ಮಕ್ಕಳಿಗಾಗಿ ಶಾಲೆ ನಡೆಸುತ್ತಿದ್ದಾರೆ. ಕ್ರಿಶ್ಚಿಯನ್ನರನ್ನು ಹಿಂದೂ ಧರ್ಮಕ್ಕೆ ಮರುಮತಾಂತರಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆನ್ನಲಾಗಿದೆ. ಬಲಪಂಥೀಯ ಉಗ್ರವಾದಿಗಳ ಜಾಲದ ಪ್ರಮುಖ ಆರೋಪಿ ಸುನೀಲ್ ಜೋಶಿ ಜತೆಯೂ ಅಸೀಮಾನಂದ ಅವರಿಗೆ ನಿಕಟ ಸಂಪರ್ಕ ಇತೆ. ಕರ್ನಲ್ ಪುರೋಹಿತ್, ಸಾಧ್ವಿ ಪ್ರಗ್ಯಾಸಿಂಗ್ ಅವರ ಜೊತೆ ಕೆಲಸ ಮಾಡಿದ್ದಾರೆ. ಈಗಾಗಲೇ ಮಾಲೇಗಾಂವ್ ಸ್ಫೋಟದಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ